i
ನಾ..ಅಂಥವನಲ್ಲ, ಆತ ಸುಳ್ಳು ಆರೋಪ ಮಾಡುತ್ತಿದ್ದಾನೆ-ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗುತ್ತಿಗೆದಾರ ಮಂಜುನಾಥ್ ಹೆದರಿಸಿ ಬೆದರಿಸಿ ಕೆಲಸ ಮಾಡುವ ಜಾಯಮಾನದವನು, ಆತ ಮಾಡುತ್ತಿರುವ ಆರೋಪ ಸುಳ್ಳು ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ಶಾಸಕ ತಿಪ್ಪಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರ ಆರ್.ಮಂಜುನಾಥ್ ಯಾವುದೇ ಕಾಮಗಾರಿ ಮಾಡಿದರು ಆತ ಹೇಳಿದ್ದೇ ಫೈನಲ್. ಅಧಿಕಾರಿಗಳಿಗೆ ನಾನು ಜಿಲ್ಲಾಧ್ಯಕ್ಷ ಅಂತ ಬೆದರಿಸ್ತಾನೆ. ಸಣ್ಣ ಪುಟ್ಟ ಕಂಟ್ರಾಕ್ಟರ್ ಗಳು ಕೆಲಸ ಕೇಳಿದಾಗ ತಾರತಮ್ಯ ಮಾಡುತ್ತಿದ್ದನು. ಯಾರ ಬೆಂಬಲಿಗರು, ಯಾವ ಪಕ್ಷ ಅಂತ ಕೇಳುತ್ತಿದ್ದನು. ಮೊದಲಿನಿಂದಲೂ ಆತ ಹಾಗೂ ನನ್ನ ಮಧ್ಯೆ ದ್ವೇಷವಿದೆ. ಆತ ಮಾಡುತ್ತಿರುವ ಆರೋಪ ಸುಳ್ಳು, ಚುನಾವಣೆ ಸಂದರ್ಭದಲ್ಲೇಕೆ ಮಾಡುತ್ತಾನೆ, ಇಷ್ಟು ವರ್ಷ ಏಕೆ ಆರೋಪ ಮಾಡಲಿಲ್ಲ ಎಂದು ತಿಪ್ಪಾರೆಡ್ಡಿ ಪ್ರಶ್ನಿಸಿದರು.
ಉಚ್ಚಂಗಿ ಯಲ್ಲಮ್ಮ ದೇಗುಲ ಕಾಮಗಾರಿ ಕಳಪೆಯಾಗಿದೆ. ಅದನ್ನು ಈಗ ಆರೋಪಿಸೋದು ಸರಿಯಲ್ಲ. ಎಲ್ಲಾ ಕಾಮಗಾರಿ ವೇಳೆ ಆತನೇ ಸುಪ್ರಿಂ ರೀತಿ ವರ್ತನೆ. ನಾನು ಅಧ್ಯಕ್ಷ ಅಂತ ದೌರ್ಜನ್ಯ ಮಾಡ್ತಾನೆ. ಅಷ್ಟು ಕೊಟ್ಟಿದೇನೆ, ಇಷ್ಟು ಕೊಟ್ಟಿದೇನೆ ಅಂತ ಹೇಳಿದ್ದಾನೆ. ಯಾರಿಗೆ ಕೊಟ್ಟಿದ್ದಾನೆ ಅಂತ ಗೊತ್ತಿಲ್ಲ.
ಆತ ಕಾಮಗಾರಿ ಮಾಡುವ ವೇಳೆ ಯುಜಿಡಿ ಕಾಮಗಾರಿ ಪೈಪ್ ಲೈನ್ ಹೊಡೆದಿದ್ದನು. ಅದನ್ನು ಕೇಳಿದ್ದೂ ತಪ್ಪಾ? ರಿಯಲ್ ಎಸ್ಟೇಟ್ ವ್ಯವಹಾರವನ್ನು ಜೊತೆಗೆ ಮಾಡಲು ಕೇಳಿದ್ದನು, ಅದನ್ನು ನಾ ವಿರೋಧಿಸಿದಕ್ಕೆ ಇದೆಲ್ಲ ಶುರುವಾಗಿದೆ. ಆತನ ಗುಣವೇ ಹೆದರಿಸಿ ಕೆಲಸ ಮಾಡೋದು. PWD ಸಚಿವರ ಎದುರಲ್ಲೇ ಆತ ನನ್ನ ವಿರುದ್ಧ ಆರೋಪ ಮಾಡಿದ್ದನು. ಆಗ ಸಚಿವರು ಅವನ ಭಾಷಣ ನಿಲ್ಸಿಸದ್ದರು. ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದಾನೆ. ಆಸ್ಪತ್ರೆಯ ಕೆಹೆಚ್ ಎಸ್ ಡಿಪಿ ಯೋಜನೆಯ ಟೆಂಡರ್ ಕೊಡಿಸದ ಹಿನ್ನೆಲೆಯಲ್ಲಿ ಆರೋಪ ಈ ವಿಚಾರದಲ್ಲಿ ಇಬ್ಬರ ಮಧ್ಯೆ ಮೌಕಿಕ ಮಾತುಕತೆ ನಡೆದಿತ್ತು ಎಂದು ತಿಪ್ಪಾರೆಡ್ಡಿ ತಿಳಿಸಿದರು.