i
ಟಿಎಸ್ಸಾರ್, ಮೊಹರೆ ಹನುಮಂತರಾಯರ ಪ್ರಶಸ್ತಿಗೆ ಮುಹೂರ್ತ, ಆಯುಕ್ತರು ಸಮ್ಮತಿ..
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸತತವಾಗಿ ಮೂರು ವರ್ಷಗಳಿಂದ ವಾರ್ತಾ ಇಲಾಖೆಯಿಂದ ಪ್ರದಾನ ಮಾಡಬೇಕಿದ್ದ ಟಿಎಸ್ಸಾರ್ ಮತ್ತು ಮೊಹರೆ ಹನುಮಂತರಾಯರ
ಪ್ರಶಸ್ತಿಗಳನ್ನು ಮಾ.13 ರಂದು ಮುಖ್ಯಮಂತ್ರಿಗಳಿಂದ ಪ್ರದಾನ ಮಾಡಿಸಲಾಗುವುದು ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು
ವಾರ್ತಾ ಆಯುಕ್ತರನ್ನು ಭೇಟಿ ಮಾಡಿ, ಪ್ರಶಸ್ತಿ ಘೋಷಣೆ ಆಗಿದ್ದರೂ ಪ್ರದಾನ ಮಾಡುವುದು ವರ್ಷದಿಂದ ಬಾಕಿ ಇದೆ ಎಂದು ವಿಷಯ ಪ್ರಸ್ತಾಪಿಸಿ
ಚರ್ಚಿಸಿದಾಗ ಈ ವಿಷಯ ಖಚಿತಪಡಿಸಿದರು.
ಮಾಧ್ಯಮ ಅಕಾಡೆಮಿ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿಯೇ ಟಿಎಸ್ಸಾರ್ ಮತ್ತು ಮೊಹರೆ ಹಣಮಂತರಾಯ ಅವರ ಹೆಸರಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು.
ಇತ್ತೀಚಿಗೆ ಕೆಯುಡ್ಲ್ಯೂಜೆ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಮತ್ತು ರಾಷ್ಟ್ರೀಯ ಮಟ್ಟದ ಹಾಗೂ ವಿಶೇಷ ಪ್ರಶಸ್ತಿ
ಪುರಸ್ಕೃತರ ಕಾರ್ಯಕ್ರಮದಲ್ಲಿ
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ವಿಷಯ ಪ್ರಸ್ತಾಪಿಸಿದ್ದನ್ನು ಇದೇ ಸಂದರ್ಭದಲ್ಲಿ ಅಧ್ಯಕ್ಷರು, ವಾರ್ತಾ ಆಯುಕ್ತರ ಗಮನಕ್ಕೆ ತಂದರು.
ಮುಖ್ಯಮಂತ್ರಿಗಳು ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ
ನೀಡಿರುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಆಯುಕ್ತರು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ ಮತ್ತಿತರರು ಇದ್ದರು.