i
ಕದ್ದ ಬೈಕ್ ಸಮೇತ ಕಳ್ಳನನ್ನು ಬಂಧಿಸಿದ ಪೊಲೀಸರು…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಬ್ಬ ಬೈಕ್ ಸಮೇತ ಕಳ್ಳನನ್ನು ಚಳ್ಳಕೆರೆ ಪೊಲೀಸ್ ಬಂಧಿಸಿ ನ್ಯಾಯಾಲಯಕ್ಕೆ ಕಳಿರುವ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಮಾ.10 ರಂದು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಆಗಿತ್ತು. ಈ ಕುರಿತು ಕಾರ್ಯ ಪ್ರವೃತ್ತರಾದ ಚಳ್ಳಕೆರೆ ಪೊಲೀಸ್ ಠಾಣೆ ಪೊಲೀಸರು ಆರೋಪಿ ಚಳ್ಳಕೆರೆ ನಗರದ ಕೂಲಿ ಕಾರ್ಮಿಕ ನವೀನ ತಂದೆ ಲೇಟ್ ವಿಶ್ವನಾಥ್ ನನ್ನು ಬಂಧಿಸಿ ಬಂಧಿತ ಆರೋಪಿಯಿಂದ ಬೈಕ್ ಮತ್ತು 20 ಸಾವಿರ ರೂ. ನಗದು ವಶ ಪಡಿಸಿಕೊಂಡಿದ್ದಾರೆ.
ಆರೋಪಿ ನವೀನ್ ಬೀಗ ಮುರಿದು ಬೈಕ್ ಕಳ್ಳತನ ಮಾಡಿದ ನಂತರ ಚಳ್ಳಕೆರೆ ಟೌನ್ ಸಂಗೀತ ಮೊಬೈಲ್ ಶಾಪ್ ನಲ್ಲಿ ಕಳ್ಳತನಕ್ಕೆ ಪ್ರಯತ್ನ ಮಾಡಿದ್ದಲ್ಲದೆ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ವಿನಾಯಕ ಕಾಂಡಿಮೆಂಟ್ಸ್ ಅಂಗಡಿಯ ಬಾಗಿಲು ಮುರಿದು ಅಂಗಡಿ ಡ್ರಾನಲ್ಲಿದ್ದ 20 ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದು ಈ ಸಂಬಂಧ ಆರೋಪಿ ಎರಡು ಪ್ರಕರಣಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕ ರಮೇಶ್ ಕುಮಾರ್ ನಿರ್ದೇಶನದಲ್ಲಿ ಪೊಲೀಸ್ ನಿರೀಕ್ಷಕ ಆರ್.ಎಫ್ ದೇಸಾಯಿ, ಪಿ.ಎಸ್.ಐ ಸತೀಶ್ ನಾಯ್ಕ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.