i
ತಲೆ ಬುರುಡೆ ಇಲ್ಲದ ನೂತನ ಸರ್ಕಾರದ ವಿನೂತನ 31 ಜಯಂತಿ ಆಚರಣೆಗಳು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಲೆ ಬುರುಡೆ ಇಲ್ಲದ ನೂತನ ಸರ್ಕಾರದ ವಿನೂತನ 31 ಜಯಂತಿ ಆಚರಣೆಗಳು ಎಂದು ನಿವೃತ್ತ ಪೌರ ಸೇವಾ ಕಾರ್ಮಿಕರ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಾಚಾರ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಿನಾಂಕ:16-05-2023ರ ಅಧಿಕೃತ ಆದೇಶ ಹೊರಡಿಸಿದೆ. ಉದಾಹರಣೆಗೆ ಒನಕೆ ಓಬವ್ವ ಜಯಂತಿ 11-11-2023ರಂದು ದಾವಣಗೆರೆ ಜಿಲ್ಲೆಯಲ್ಲಿ ಆಚರಿಸಲು ಆದೇಶದಲ್ಲಿದೆ, ಇದು ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗಕ್ಕೆ ಸೇರಿದ್ದು ಎಂದು ಕನ್ನಡ ನಾಡಿಗೆ ತಿಳಿದಿರುವ ವಿಚಾರ.
ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ರೂ.5,00,000/- , ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ರೂ.50,000/- ಮತ್ತು ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ರೂ.20,000/- ನಿಗದಿಪಡಿಸಲಾಗಿದೆ.
ಹಾಗಾದರೆ ರಾಜ್ಯಮಟ್ಟದ ಹಾಗೂ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಹಣ ನಿಗದಿ ಮಾಡಿರುವ ಉದ್ದೇಶವಾದರೂ ಏನು?
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ತಕ್ಷಣ ಎಚ್ಚೆತ್ತುಕೊಂಡು, ಈ ಹಿಂದೆ ಇದ್ದಂತೆ, ಹಿಂದಿನ ಪದ್ಧತಿಗಳನ್ನು ಅನುಸರಿಸಬೇಕೆಂದು ಎಲ್.ನಾರಾಯಣಾಚಾರ್ ಆಗ್ರಹಿಸಿದ್ದಾರೆ.