i
ಬಡ ಜನರ ಬದುಕಿಗೆ ದಾರಿದೀಪವಾಗಿದ್ದ ಡಿ.ಬೋರಪ್ಪಾಜಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮದಕರಿನಾಯಕ ವಿದ್ಯಾಸಂಸ್ಥೆ ಕಟ್ಟುವ ಮೂಲಕ ಡಿ.ಬೋರಪ್ಪಾಜಿ ಅವರು ಬಡ ಜನರ ಬದುಕಿಗೆ ದಾರಿದೀಪವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸೇವೆಯನ್ನು ಮಾಡಿ ನಮ್ಮ ಸಂಸ್ಥೆಗೆ ಕೀರ್ತಿ ತರಬೇಕು ಎಂದು ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಮಕ್ಕಳಿಗೆ ಕಿವಿ ಮಾತು ಹೇಳಿದರು. ನಗರದ ಕೋಟೆ ಮುಂಭಾಗದಲ್ಲಿರುವ ಮಹರಾಣಿ ಕಾಲೇಜಿನ ಆವರಣದಲ್ಲಿನ ವಾಲ್ಮೀಕಿ ಸಭಾಂಗಣದಲ್ಲಿ ಮದರ್ ಥೆರೆಸಾ ಸ್ಕೂಲ್ ಆಫ್ ನಸಿಂಗ್ ವಿದ್ಯಾರ್ಥಿಗಳ ಬಿಳ್ಕೊಡುಗೆ ಮತ್ತು ಸ್ವಾಗತ ಸಮಾರಂಭ ಹಾಗೂ ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಿಗೆ ಆಯೋಜಿಸಿ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಉಚಿತ ಮದಕರಿ ವಿದ್ಯಾಸಂಸ್ಥೆ ಕೊಟ್ಟಿದೆ. ಯಶೋಧರಮ್ಮ ಬೋರಪ್ಪಾಜಿ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯುತ್ತಿದ್ದೇನೆ. ಅವರು ಜಿಲ್ಲೆಯ ನಾನಾ ಭಾಗದಲ್ಲಿ ಶಾಲಾ ಕಾಲೇಜುಗಳು ನಿರ್ಮಾಣ ಮಾಡುವ ಕೆಲಸ ಬೋರಪ್ಪಾಜಿ ಅವರು ಮಾಡಿದ್ದಾರೆ. ದೈಹಿಕ ಶಿಕ್ಷಕರ ಕಾಲೇಜು, ಬಿಇಡಿ, ನಸಿಂಗ್ , ಪ್ರೌಢ ಶಾಲೆ, ಪ್ರಾಥಮಿಕ ಶಾಲೆ ಸೇರಿ ಎಲ್ಲಾ ರೀತಿಯ ಶಿಕ್ಷಣಗಳನ್ನು ನೀಡುವ ಕೆಲಸ ಮಾಡಿದ್ದಾರೆ. ದೊಡ್ಡಾಲಘಟ್ಟ ಗ್ರಾಮದಿಂದ ಸಿರಿಗೆರೆಗೆ ಶಿಕ್ಷಣ ಪಡೆಯಲು ನಿತ್ಯ ೫ ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿದ್ದರು ಇಂತಹ ಸ್ಥಿತಿ ನಮ್ಮ ಮುಂದಿನ ಪೀಳಿಗೆಗೆ ಬರಬಾರದು ಎಂಬ ದೃಷ್ಟಿಯಿಂದ ಶಾಲೆಗಳನ್ನು ತೆರೆಯುವ ಕೆಲಸ ಮಾಡಿದರು ಎಂದು ನೆನೆದರು. ನರ್ಸಿಂಗ್ ತರಬೇತಿ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮವಾಗಿ ಕಾರ್ಯ ಮಾಡಬೇಕು. ನಮ್ಮ ಕಾಲೇಜಿನಲ್ಲಿ ತರಬೇತಿ ಪಡೆವರು ಉನ್ನರ ಹುದ್ದೆಗಳು ಅಲಂಕರಿಸಿದ್ದಾರೆ. ರಾಜ್ಯದ ನಾನಾ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು ನಮಗೆ ಹೆಮ್ಮೆ ತಂದಿದೆ. ಈಗ ತೃತೀಯ ವರ್ಷದ ತರಬೇತಿ ಪಡೆದು ಕಾಲೇಜಿನಿಂದ ಬಿಳ್ಕೊಡುಗೆ ನೀಡುತ್ತಿದ್ದರು ಇದು ನಿಮ್ಮ ಕಾಲೇಜು ನಿಮ್ಮ ಊರಿನ ಬಡ ವಿದ್ಯಾರ್ಥಿಗಳು ಮಾರ್ಗದರ್ಶನ ನೀಡುವ ಕೆಲಸ ನೀವು ಮಾಡಿ ಎಂದು ತಿಳಿಸಿದರು. ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ಪಡೆದಿರುವ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಎಂ.ಎನ್.ಅಹೋಬಲಪತಿ ಅವರು ಪಾವಗಡ ತಾಲೂಕಿನ ರಂಗಸಮುದ್ರವರಾದ ಇವರು ನಮ್ಮ ಸಂಸ್ಥೆಯ ಕ್ಯಾದಿಗುಂಟೆಯ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದು ಈ ಹಂತಕ್ಕೆ ಬಂದಿರುವುದು ಸಾಮಾನ್ಯವಲ್ಲ. ಅನೇಕ ಹೋಟರಗಳ ಮೂಲಕ ಅವರು ಯುವ ಸಮೂಹಕ್ಕೆ ಪ್ರೇರಣೆಯಾಗಿದ್ದಾರೆ. ಮತ್ತೊಬ್ಬರಾದ ಪಿ.ವಿ.ಅರುಣ್ ಕುಮಾರ್ ಅವರು ಹುಣಸೇಕಟ್ಟೆ ಗ್ರಾಮದಲ್ಲಿ ಹುಟ್ಟಿದರು ಚಿಕ್ಕ ವಯಸ್ಸಿನಲ್ಲಿ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಏಳುಬೀಳುಗಳ ನಡುವೆ ಯಶಸ್ಸು ಕಂಡಿದ್ದಾರೆ. ಒಂದು ಉದ್ಯಮ ನಡೆಸುವುದು ಸುಲಭವಲ್ಲ ಆದರೆ ಟಿವಿಎಸ್ ಮತ್ತು ಸ್ಟೀಲ್ ಸಿಮೆಂಟ್ ಎರಡು ಉದ್ಯಮಗಳು ಯಶಸ್ಸು ಪಡೆಯುವ ಮೂಲಕ ಗ್ರಾಮೀಣ ಯುವಕರು ಛಲವಿದ್ದರೆ ಏನುಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಎಂ.ಎನ್.ಅಹೋಬಪತಿ ಮತ್ತು ಪಿ.ವಿ.ಅರುಣ್ ಕುಮಾರ್ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆರ್. ಮಂಜುಳ, ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಎಂ.ಎನ್.ಅಹೋಬಲಪತಿ, ಪಿ.ವಿ.ಅರುಣ್ ಕುಮಾರ್ , ಮತ್ತು ಮದರ್ ಥೆರೆಸಾ ಕಾಲೇಜಿನ ಉಪನ್ಯಾಸಕರಾದ ವಿಜಯ ಪೋತದಾರ್, ಪೂಜಾ,ಭಾನು, ವಿದ್ಯಾ, ಮತ್ತು ನರ್ಸಿಂಗ್ ಕಾಲೇಜು ಕಾರ್ಯದರ್ಶಿ ಹುಣಸೇಕಟ್ಟೆ ಮಹಂತೇಶ್ ಇದ್ದರು.