i
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಸಂತಸ ತಂದಿದೆ-ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಮ್ಮ ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ಆಗಿರುವುದು ತುಂಬಾ ಸಂತೋಷವಾಗಿದೆ. ಬಿಜೆಪಿ ಪಕ್ಷದಲ್ಲಿ ಎಲ್ಲಾರೂ ಇಷ್ಟಪಡುವಂತಹ ಮತ್ತು ಎಲ್ಲಾ ಜಾತಿ ಜನಾಂಗದವರು ಬೆಂಬಲಿಸುವಂತಹ ನಾಯಕರಾಗಿ ವಿಜಯೇಂದ್ರ ಅವರು ಹೊರಹೊಮ್ಮಿದ್ದಾರೆ. ಇವರು ಪಕ್ಷವು ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆಯಲು ಸಹಕಾರವಾಗಲಿದ್ದು.ಪಕ್ಷಕ್ಕೆ ಹೊಸ ಭರವಸೆ ಮೂಡಿದೆ. ಅವರ ತಂದೆಯಂತೆ ಇವರು ಸಹ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಸಂಘಟನೆಯನ್ನು ಮೈಗೂಡಿಸಿಕೊಂಡಿದ್ದು ಜನರನ್ನು ಆಕರ್ಷಿಸುವ ಶಕ್ತಿ ಇದೆ. ಇವರನ್ನು ಆಯ್ಕೆ ಮಾಡಿದಂತಹ ಕೇಂದ್ರದ ನಮ್ಮ ಪ್ರಧಾನಿಗಳಾದ ಮೋದಿಜೀ, ಅಮಿತ್ ಷಾ, ನಡ್ಡಾಜೀ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ.ಮುಂದಿನ ದಿನದಲ್ಲಿ ಅವರನ್ನು ಅದ್ದೂರಿಯಾಗಿ ನಮ್ಮ ಜಿಲ್ಲೆಗೆ ಸ್ವಾಗತಿಸುತ್ತೇವೆ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.