i
ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ರಚನೆ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2023ನ್ನು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ ಅವರು ವಿಧಾನ ಪರಿಷತ್ ಸದನದಲ್ಲಿ ಮಂಡಿಸಿ ಪರ್ಯಾಲೋಚನೆಗೆ ಸೂಚಿಸಿದರು.
ಸದಸ್ಯರಾದ ತೇಜಸ್ವಿನಿಗೌಡ, ಕೆ.ಎ.ತಿಪ್ಪೇಸ್ವಾಮಿ, ವೈ.ಎಂ.ಸತೀಶ್, ಕೇಶವ ಪ್ರಸಾದ್ ಸೇರಿದಂತೆ ಮತ್ತಿತರರು ಮಾತನಾಡಿ, ವಿಧೇಯಕವು ಈ ಪಾರಂಪರಿಕ ಪ್ರದೇಶಗಳ ರಕ್ಷಣೆ ಹಾಗೂ ಸ್ಥಳೀಯರ ಅಭಿವೃದ್ಧಿ ಎರಡೂ ದೃಷ್ಟಿಯಿಂದ ಪ್ರಯೋಜನಕಾರಿಯಾಗಿರಬೇಕು ಎಂದು ಸಲಹೆ ನೀಡಿದರು.
ಹಂಪಿಯು ರಾಜ್ಯದ ಅತ್ಯಂತ ಹೆಮ್ಮೆಯ ಸ್ಥಳವಾಗಿದ್ದು ವಿಶ್ವವಿಖ್ಯಾತಿಯಾಗಿದೆ. ಈ ವಿಧೇಯಕದ ಮೂಲಕ ಹಂಪಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅತ್ಯಂತ ವ್ಯವಸ್ಥಿತವಾಗಿ ಪ್ರಾಕೃತಿಕ ಸೌಂದರ್ಯಕ್ಕೆ ಹಾನಿಯಾಗದಂತೆ ಅಭಿವೃದ್ದಿಪಡಿಸಿ ಸಂರಕ್ಷಿಸಲು ಸಾಧ್ಯವಾಗಲಿದೆ ಎಂದರು. ವಿಧೇಯಕವು ಸದನದಲ್ಲಿ ಸರ್ವಾನುಮತದಿಂದ ಅಂಗೀಕಾರ ಪಡೆಯಿತು.