i
ಕಾರು-ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಬೆಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ಹೊಟ್ಟೆಪ್ಪನಹಳ್ಳಿ-ಕಮ್ಮತ್ಮರಿಕುಂಟೆ ಗ್ರಾಮದ ಮಧ್ಯದಲ್ಲಿ ರಾತ್ರಿ ೮ರ ಸಮಯದಲ್ಲಿ ಕಾರು ಹಾಗೂ ಮೋಟಾರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಚಳ್ಳಕೆರೆ ಗಾಂಧಿನಗರ ನಿವಾಸಿ ಆನಂದ(೪೦) ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ಮೃತ ಆನಂದ ಸಾಣೀಕೆರೆ ಗ್ರಾಮದಲ್ಲಿ ಸೆಲೂನ್ಶಾಪ್ ನಡೆಸುತ್ತಿದ್ದು, ಪ್ರತಿನಿತ್ಯ ಚಳ್ಳಕೆರೆ ಗಾಂಧಿನಗರದಿಂದ ಸಾಣೀಕೆರೆಗೆ ಮೋಟಾರ್ ಬೈನಲ್ಲಿ ಪ್ರಯಾಣಿಸುತ್ತಿದ್ದ ಭಾನುವಾರ ರಾತ್ರಿ ಸಾಣೀಕೆರೆ ಗ್ರಾಮದಿಂದ ಚಳ್ಳಕೆರೆ ಕಡೆಗೆ ಬರುವ ಸಂದರ್ಭದಲ್ಲಿ ಕಾರು ಈತನ ಬೈಕ್ಗೆ ಡಿಕ್ಕಿ ಪಡಿಸಿದ್ದು, ತೀರ್ವವಾಗಿ ಗಾಯಗೊಂಡ ಆನಂದ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.