i
ನವೋದಯ, ಮುರಾರ್ಜಿ ವಸತಿ ಶಾಲೆಗಳ ಪರೀಕ್ಷೆಗೆ ಉಚಿತ ತರಬೇತಿ, ಹೆಚ್ಚಿನ ಅಂಕ ಪಡೆದವರಿಗೆ ಬಹುಮಾನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
2022-23 ನೇ ಸಾಲಿನ ನವೋದಯ, ಮುರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತರಬೇತಿ ಏರ್ಪಡಿಸಲಾಗಿದೆ. ದಿನಾಂಕ-8-01–2023 ಭಾನುವಾರದಂದು ಮಾದರಿ ಮೊರಾರ್ಜಿ ದೇಸಾಯಿ ಪರೀಕ್ಷಾ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಣೆ ಮಾಡಲಾಗುವುದು ಎಂದು ಶಿಕ್ಷಕಿ ಹೇಮಲತ ತಿಳಿಸಿದ್ದಾರೆ.
ಪರೀಕ್ಷೆ ದಿನದೊಂದು ಬೆಳಗ್ಗೆ 11 ರಿಂದ 1 ರ ವರೆಗೆ ಪರೀಕ್ಷೆ ನಡೆಯಲಿದ್ದು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಣೆ ಮಾಡಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ಪ್ರಥಮ ಬಹುಮಾನ 500 ರೂ, ದ್ವಿತೀಯ ಬಹುಮಾನ 400 ರೂ, ತೃತೀಯ ಬಹುಮಾನ 300 ರೂ.ಗಳನ್ನು ನೀಡಲಾಗುತ್ತದೆ.
ಮಾದರಿ ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ಈ ಸದಾವಕಾಶ ಉಪಯೋಗಿಸಿಕೊಳ್ಳಲು 9686194485ಗೆ ಪೋಷಕರು ಕರೆ ಮಾಡಿ ಇಲ್ಲವೆ ನೇರವಾಗಿ ಭೇಟಿ ಮಾಡುವ ಆಸಕ್ತರು ಹಳೆಯ ವಿಜಯ ಬ್ಯಾಂಕ್ ಎದುರು ಹಿರಿಯೂರಿನಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಶಿಕ್ಷಕಿ ಹೇಮಲತ ತಿಳಿಸಿದ್ದಾರೆ.